ಮೀರಬಾರದಲ್ಲ ಹೊತ್ತು

ರಾಜಕುಮಾರನ ಹೊತ್ತ ಕುದುರೆಗೆ
ಉಸಿರು ಬಿಗಿಹಿಡಿದು
ನೇರ ಹಾದಿಗೆ ಕಣ್ಣು ಜಡಿದು
ಸುಮ್ಮನೆ ಓಡುವ ಉಮೇದು.

ನೆಲದ ಆಳಗಳನರಿಯದ
ಅದರ ತುಡಿತಕ್ಕೆ ಸ್ಪಂದಿಸದ
ನಿಂತಲ್ಲೇ ಕ್ಷಣ ನಿಲ್ಲದ ಚಪಲಚಿತ್ತ
ಕುದುರೆ ಕಾಲುಗಳಿಗೋ ಚಕ್ರ.

ಒಮ್ಮೆಯೂ ನೆಲಸೋಕದ ರಾಜಕುಮಾರನಿಗೆ
ಸದಾ ಬೀದಿ ನಿರ್ಮಿಸುವ ಕೆಲಸ
ಹಾದಿಯುಳಿಸುವ ಕಾಯಕ
ದಿಗ್ವಿಜಯದ ಮಹಾನ್ ಹಂಬಲ.

ಧೂಳು ಮುಸುಕಿದ ನೆಲದಲ್ಲಡಗಿದ
ಆರ್ದ್ರ ಮಣ್ಣಿನ ಕಂಪು
ಬೆಚ್ಚನೆಯ ಪಿಸುಮಾತು
ಕುದುರೆಗೆ ರಾಜಕುಮಾರನಿಗೇನು ಗೊತ್ತು?

ಈ ನೆಲ ಕಲ್ಲಾದ ಅಹಲ್ಯೆಯಲ್ಲ
ಶಾಪ ವಿಮೋಚನೆಗೂ ಕಾಯುತ್ತಿಲ್ಲ
ಯಾವುದೇ ಆಕ್ಷೇಪಗಳಿಲ್ಲ ಜಗಳವೂ ಇಲ್ಲ
ಎಲ್ಲಕ್ಕೂ ಪಾಠ ಕಲಿಸುವ ಹುಂಬತನವಿಲ್ಲ.

ಓಡುವ ಕುದುರೆಗೆ ರಾಜಕುಮಾರನಿಗೆ
ಪುರುಸೊತ್ತಿಲ್ಲದ ಅವರದೇ ತುರ್ತು
ನೆಲಕ್ಕೂ ಸುಮ್ಮನಿದ್ದೇ ಗೆಲ್ಲುವ ಪಟ್ಟು
ಅದರದರ ಪಾಡಿನಲಿ ಮೀರಬಾರದಲ್ಲ ಹೊತ್ತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾರ್ಥನೆ
Next post ಅಶ್ಲೀಲ ಅಂಬೋದು ಡ್ರೆಸ್‍ನಾಗಲ್ಲ ಇರೋದು

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys